Saturday, August 1, 2009

ಅನ್ವೇಷಣೆ

ಹೆಜ್ಜೆಯ ಮೇಲೊಂದು ಹೆಜ್ಜೆಯನಿಡುತ,

ಇಲ್ಲದಿರುವುದನು ಪಡೆಯುವ ತುಡಿತ,

ಇರುಳಿನ ಕನಸನು ಪಡೆಯುವ ಹವಣಿಕೆ,

ಕೈಗೆಟುಕದ ಕನಸನು ಗೆಲ್ಲುವ ಚಡಪಡಿಕೆ.

ಆಸೆಗಳ ನಿಧಿಯುಂಟು ಹೃದಯಾಂತರಾಳದಲಿ,

ಕನಸುಗಳ ಹೆಪ್ಪುಂಟು ಆಸೆಯ ಮೊಸರಿನಲಿ,

ಅಕ್ಷಯ ಪಾತ್ರೆಯಿದು ಮೊಸರು ಮುಗಿಯಲಾರದು,

ಸತ್ತರೆ ಮತ್ತೊಂದು ಜನಿಸುವ ಜಾತಿಯಿದು.

ಜೀವನದ ರಸವಿದು ಆಸೆ ಕನಸಿನ ಮಿಲನ,

ಬೆಳವಣಿಗೆಯ ನಾಂದಿಯಿದು ಹುಮ್ಮಸ್ಸಿನ ಸಿಂಚನ,

ಧ್ಯೇಯವಾಗಿ ಹಾರುತ ಪೀಳಿಗೆಗಳ ನಡುವೆ,

ತುಡಿತಕೆ ಬಲಿಯಾಗಿ ಶತಮಾನಗಳೇ ಕಳೆದಿವೆ.

ಜೀವನದ ಓಟದಲಿ ಇಲ್ಲದಿರುವುದರ ಆಸೆಗೆ,

ಜೊತೆಗಿರುವ ನಿಧಿಯನು ಸರಿಸುವೆವು ಬದಿಗೆ.

ಹುಚ್ಚೆದ್ದು ಪಡೆದ ಕನಸಿನ ಖುಷಿಗೆ,

ಆಯಸ್ಸು ಮುಂದಿನ ಇರುಳಿನವರೆಗೆ.

ಜೀವನವಿದು ಬರಿಯ ಹುಚ್ಚು ಓಟವೇ?

ತೃಪ್ತಿಯ ಆಸ್ವಾದನೆಗೆ ಸಮಯವು ಬೇಡವೇ?

ನನಗಿಂದು ಜಗವು ಓಟದ ಸಂತೆಯಾಗಿಹುದು,

ಜಗವು ನನ್ನನ್ನು ಮರಳನೆಂದು ಕರೆದಿಹುದು.

ಹಾರುವ ಎತ್ತರದ ಎಣಿಕೆಯಿರಬೇಕು,

ಕನಸುಗಳ ಒಡನಾಟಕೆ ಬೇಲಿಯಿರಬೇಕು.

ಕ್ಷಣಕ್ಷಣದ ಕಷ್ಟದಲಿ ಗುರಿಯನೇ ಕಾಣುತಾ,

ಗೆದ್ದ ಪ್ರತಿಕ್ಷಣದಿ ತೃಪ್ತರಾಗಿ ತೇಲುತಾ.

ಮುಂದಿನ ಕನಸಿಗೆ ಹೇಳಿರಿ ನಿಲ್ಲೆಂದು,

ಈಗಷ್ಟೆ ಗೆದ್ದಿರುವೆ ಹಿಂದಿನ ಕನಸೊಂದು.

ಜೊತೆಗಿರುವ ಆಸ್ತಿಯಲ್ಲವೇ ಅಮೂಲ್ಯ,

ಮರೆಯಬೇಡಿ ಆಪ್ತರನು ಇಂತಹ ಸಮಯ.

ಕನಸಗಳ ಕಾಣುವುದು ತಪ್ಪಿರಲಾರದು,

ತ್ರುಷೆಯಿರದ ಜನರಿಂದ ಜಗವು ನಡೆಯಲಾರದು,

ನಾಳಿನ ತುಪ್ಪದಾಸೆಗೆ ಚೆಳಬೇಡಿ ಕೈಯಲ್ಲಿನ ಬೆಣ್ಣೆ,

ತಪ್ಪಲ್ಲವೇ ಬರಿಯ ಕನಸುಗಳ ಹುಚ್ಚು ಅನ್ವೇಷಣೆ?

Saturday, January 17, 2009

ವಾನಪ್ರಸ್ಥ

ಜ್ಞಾನದ ಬೆಳಕಿನಲಿ ಜೀವನವ ಸವೆಸಲು,
ನವೀನ ಸಂಬಂಧಗಳ ಕೊಂಡಿಗಳನು ಬೆಸೆಯಲು,
ಜಗದಿ ತನ್ನ ಗುರುತನು ಉಳಿಸಲು ಪ್ರಾಯಸ್ಥ,
ಆಸೆಗಳ ಗೆಲ್ಲಲು ಹವಣಿಸುವವ ಗೃಹಸ್ಥ.

ತಾ ಬೆಸೆದ ಕೊಂಡಿಗಳನು ಕಳಚುತಾ,
ಆಸೆಗಳಿಂದ ವಿಮುಖನಾಗಿ ಬೆಳೆಯುತಾ,
ಆತ್ಮಜ್ಞಾನವ ಪಡೆದರೆ ಪರಮಾರ್ಥಿ,
ನಾಂದಿ ಹಾಡಿದವ ವಾನಪ್ರಸ್ಥ.


ವೈಭವಗಳ ತಾ ಮರೆತು ಸನ್ಯಾಸಿಯಾಗಲು ಹವಣಿಸುವವ,
ಸೋತುಬಿಡಲೇ ಎನ್ನುವ ಮನಸನು ನಿಗ್ರಹಿಸುವ,
ಅಳುಕಿನ ಬಂದಿಯಾಗದೆ,ನಲಿವಿನ ದಾಸನಾಗದೆ,
ನಿರಪೇಕ್ಷಿತನಾಗಲು ಪಲ್ಲವಿಯ ನೀ ಹಾಡಿದೆ.

ಧೈರ್ಯವಿರಬೇಕು ಮೇಣದ ಮನಸನು ಕಲ್ಲಾಗಿಸಲು,
ಜೀವನ್ಮೋಹದ ಜ್ವಾಲೆಯಿಂದ ದೂರವಿರಿಸಲು,
ಮೋಹಿತನಾಗದೆ ಮೋಹವನ್ನು ದೂರವಿಡುವ,
ಸನ್ಯಾಸದ ನಾಂದಿ ಹಾಡುವ ಧೈರ್ಯಸ್ಥ ಈ ವಾನಪ್ರಸ್ಥ.

ಆಸೆಯ ದಾಸನಿಂದ ಆಸೆಯ ಗುರುವಾಗಲು,
ಬಿಸಿರಕ್ತದ ಗೃಹಸ್ಥನಿಂದ ತಾಳ್ಮೆಯ ಪರಮಾರ್ಥಿಯಾಗಲು,
ವೈರುಧ್ಯಗಳ ನಡುವಿನ ಪಯಣವಲ್ಲ ಸುಲಭ,
ದಿಗಂತಕೆ ಹೊರಟಂತೆ ಕಾಣಲು ಕಲೆತ ಪೃಥೆ-ನಭ.


ಮಾಯೆಯ ಬಿಸಿಲ್ಗುದುರೆಯಿಂದ ಮೇಲೇರಿ ಬಂದು,
ಸೂಸುತ ಜ್ಞಾನದ ಸ್ಫಟಿಕ ಕಿರಣಬಿಂದು,
ಕ್ಷಣಕ್ಷಣದಲ್ಲೂ ಮನವನು ಕಠೋರವಾಗಿಸುತ,
ಅಂತರಂಗ ಬಹಿರಂಗವನು ಶುದ್ಧಗೊಳಿಸುತಾ.


ಗೃಹಸ್ಥನಾದೊಡೆ ಮನೋನಿಗ್ರಹ ಕಷ್ಟ,
ಸನ್ಯಾಸಿಯಾದೊಡೆ ಕಾಯ್ದುಕೊಳ್ಳಲು ಕಷ್ಟ,
ಅರಿಷಡ್ವರ್ಗಗಳ ಮೆಟ್ಟುವ ಪಯಣವಿನ್ನೂ ಕಷ್ಟ,
ಅದನೇ ಮಾಡುವವ ವಾನಪ್ರಸ್ಥ ಮರೆತು ತನ್ನೆಲ್ಲ ಅಭೀಷ್ಟ.

ಅವಲಂಬಿತರನು ಪೋಷಿಸಬೇಕು,ಬಾಹ್ಯ ಜ್ಞಾನವ ರಕ್ಷಿಸಬೇಕು,
ಪ್ರೀತಿಪಾತ್ರರಲಿ ಸೋಲಬೇಕು, ಬಾಹ್ಯ ಜೀವನದಿ ಗೆಲ್ಲಬೇಕು,
ಇದನು ಸಾಧಿಸಲು ಆಗಬೇಕು ನಾ ಅನಿವಾರ್ಯ ಗೃಹಸ್ಥ,
ಆದರೂ ಮನದಲಿ ಇಚ್ಚಿಸಿರುವೆ ನಾ ಆಗಲು ನಿರಂತರ ವಾನಪ್ರಸ್ಥ.

Wednesday, December 24, 2008

ದ್ವಂದ್ವ

ಉದ್ಧಟ ಮನದ ಆರ್ಭಟವಿರಲು,
ಧರ್ಮಾಧರ್ಮದ ಗೊಂದಲವಿರಲು,
ಸರಿಯಾದ ದಾರಿಯ ಹುಡುಕುತ ಕೂರುವೆವು,
ನಿರ್ಧರಿಸಲಾಗದು ಅದುವೇ ದ್ವಂದ್ವವು.

ಬಾಳದಾರಿಯಲಿ ಅನೇಕ ಕವಲುಗಳು,
ದ್ವಂದ್ವ ದರ್ಶನವ ನೀಡುವ ಕವಲುಗಳು.
ಆರಿಸಿದ ಹಾದಿಯೇ ಬಾಳಿನ ಸತ್ಯವು.
ಮಿಥ್ಯವೇ ಸರಿಯಾದ ಬಗೆಗಳು ಹಲವು.

ಅಹಂಕಾರದ ದೀಪವು ನಮ್ಮೊಳು ಉರಿಯಲು,
ಸಾಧನೆಗೈಯುವ ಹುಮ್ಮಸ್ಸನು ನೀಡಲು,
ನಾನು ನಾನೆಂಬ ಅಹಂಕಾರವ ಇಲ್ಲದಿರೆ,
ಯಾರಿಗಾಗಿ ನಾ ಸಾಧಿಸಲಿ ಹೇಳು ದೊರೆ?

ಅಹಂಕಾರದ ದೀಪಕೆ ಹಠವೇ ಜೀವವು,
ಹಠವಿಲ್ಲದಿರೆ ನಾವಿದ್ದರೂ ನಿರ್ಜೀವ,
ನಮ್ಮಲಿ ಹಠದ ಹರಿವಿರದಿದ್ದರೆ,
ನಮಗೆ ನಾವೇ ಆಗುವೆವು ಹೊರೆ.

ಧರ್ಮವೋ ಮಿತ್ರನೋ ಎಂಬ ಪ್ರಶ್ನೆಯಲಿ,
ಮಿತ್ರನನು ಆರಿಸಿದ ಪ್ರಮೇಯಗಳೆಷ್ಟೋ?
ಮಿತ್ರನೇ ತಪ್ಪಾಗಿದ್ದ ಪಕ್ಷದಲಿ,
ನಮ್ಮ ತಪ್ಪನ್ನು ಒಪ್ಪಿಕೊಂಡ ವಿಧಗಳೆಷ್ಟೋ?

ಸರಿ ತಪ್ಪುಗಳ ದರ್ಶನವಿರದೆ ನಾವು,
ಕಾಲಕನುಗುಣವಾಗಿ ನಡೆಯುವೆವು ನಾವು,
ನಮ್ಮ ಪ್ರತಿಯೊಂದು ನಿರ್ಧಾರವು,
ದ್ವಂದ್ವವ ದಾಟಿ ಬಂದ ಪ್ರಮೇಯವು.

ಕವಲುಗಳೇ ನಿರ್ಧಾರಗಳೇ ಜಗದ ಶಕ್ತಿಯು,
ನಿನ್ನ ತಪ್ಪುಗಳಲ್ಲೇ ಭಗವಂತನ ಯುಕ್ತಿಯು.
ಜೀವನದ ಸುಂದರ ದರ್ಶನ ಈ ಕವಲು,
ಜೀವನ ಮಾಯಾಸುಳಿಯ ಒಡಲು.

ಗೆಲುವು ನೋಡಿದರೆ ಹರುಷದ ಆಗರ,
ಸೋಲು ಕಂಡರೆ ಕಲಿಕೆಯ ಭಂಡಾರ,
ಇದುವೇ ನಮ್ಮ ಜೀವನದ ದ್ವಂದ್ವ,
ಇದಿಲ್ಲದೇ ಜೀವನ ಹರುಶವಿರದ ಪರ್ವ.

Thursday, December 11, 2008

ನಿನ್ನ ಒಂದು ಹಠವು

ಮನದ ಮೂಲೆಯಲಿ ಕತ್ತಲ ಕೋಣೆಯಲಿ,
ಸುಂದರ ಘಳಿಗೆಯಲ್ಲಿ ಆಸೆ ಮೂಡಿದೆ.
ಬಿಸಿಯ ರಕ್ತದ ಗೆಲುವಿನ ಓಟದಲಿ,
ನೀನರಿಯದೆ ಆಸೆ ಹಠವಾಗಿ ಮಾರ್ಪಟ್ಟಿದೆ.

ನನ್ನ ರಭಸವ ನೀ ತಡೆದು ನೋಡು,
ನಾನಿಲ್ಲದೆ ಜಗದೊಳು ಗೆಲ್ಲುವವರಾರು,
ಭಯವನ್ನೇ ನಾ ಹೆದರಿಸುವೆ,
ಮಿಕ್ಕವರನ್ನು ನಾನು ಇನ್ನೆಲ್ಲಿ ಬಿಡುವೆ?

ಆಸೆಯ ಮಳೆಗೋ ವಯಸಿನ ಹದಕೋ,
ನಿನ್ನೊಳಗಿನ ಅಸುರನು ಎದ್ದಿಹನು,
ಹಠವೆಂದು ಹೆಸರಿಸಿ, ಮನಸನು ಚಿವುಟಿಸಿ,
ಗೆಲುವಿನ ನಗುವನು ನಕ್ಕಿಹನು.

ನಿನ್ನ ನಗುವಿನಲಿ ನನ್ನ ವಿರಹವಿದೆ,
ನನ್ನ ಅಶ್ರುವನು ನೀ ಪ್ರವಹಿಸಿದೆ.
ಪುನಃ ಪುನಃ ಕರೆದು ನಾ ಕೆಂಪಾದೆ,
ಹರಿವ ನೀರನ್ನು ನಾ ತಡಿಯಲಾಗದೆ.

ಹರಿವ ಓಟದಲಿ ನಿಲ್ಲಲು ನಾನು,
ಹೋಗಬೇಡೆಂದು ಹೇಳುವ ಕಣ್ಣು,
ಒಗ್ಗಟ್ಟಾಗಿ ಹರಿದರೂ ಇನ್ನು,
ನಿನ್ನೆದುರು ನಾ ಮಾಡಲಿ ಏನು?

ಹಾರುವ ನನ್ನಯ ಪರ ನೀ ಹರಿದೆ,
ನನ್ನೊಳು ಆಸೆಯ ಭಾರವ ಮೂಡಿಸಿದೆ,
ನೀ ನನಗೆ ಬೇಡವೆಂದು ನಾ ಓಡಿದರೆ,
ಕಣ್ಣೀರ ಹನಿಯ ಒದ್ದೆಯು ಹಿಂದೆಳೆದಿದೆ.

ಜೀವಕೆ ನಾನು ಬಹಳ ಅವಶ್ಯವೇ,
ಮೂಗಿನೊಳು ಬರಿಯ ಬಿಸಿಯ ಅನುಭವವೇ,
ಹಿಡಿದಿಹೆ, ನಿಟ್ಟುಸಿರ ಬಿಡುತಿರುವೆ,
ತಡೆಯಲಾಗದೆ ಭಾರವ ನಾ ಎಂದೋ ನಿಲ್ಲುವೆ.

ಹಸಿರು ಗಿಡವಾಗಿದ್ದೆ ನಾನು,
ಮರವಾಗಿ ಬೆಳೆಯಬೇಕೆಂದಿದ್ದೆ ನಾನು,
ಚಿವುಟಿದೆಯಾ ನನ್ನ, ಮೊಟಕಿದೆಯಾ ಎನ್ನ,
ದುಷ್ಟ, ಹೇಳು ಯಾರು ಹೊಡೆವರು ನಿನ್ನ.

ಎನಗೆ ಸಾವು ಎಲ್ಲಿದೆ, ಮನವು ನನ್ನ ಕೈಲಿದೆ,
ನಿಮ್ಮ ದುಃಖ ವಿಷಾದಕೆ ನನ್ನ ಥೂ ಇದೆ.
ನನ್ನ ಬಾಳ ಪಯಣಕೆ ನೀವೇ ಮೆಟ್ಟಿಲು,
ಮೇಲೆ ನಿಂತ ಗೆಲುವ ಕೈಗೆ ನನ್ನ ತೊಟ್ಟಿಲು.

ಮೇಲಿನ ಮಾತನು ಕೇಳಿದಿರಲ್ಲವೇ,
ಎಲ್ಲಿಯದೆಂದು ತಿಳಿಯಲಿಲ್ಲವೆ ?
ಹಾಕಿರಿ ಯೋಚನೆಯ ಮಣೆಯನು,
ಮನದೊಳಗೆ ಕಾಣುವಿರಿ ಉತ್ತರವನ್ನು.

ಕಣ್ಣಿನ ವಿರಹವು, ಕಣ್ಣೀರ ಓಟವು,
ಹಾರುವ ಮನದ ಪರಿತಾಪವು,
ಉಸಿರಿನ ಬಿಸಿಯೂ, ಭಾವನೆಯ ಹಂಸಗಾನವು,
ನಿನ್ನದಲ್ಲದ ಮನಸಿನ ನಿನ್ನಯ ಕರ್ಮಗಳಿವು.

ಆಸೆಯು ಮುರಿದೊಡೆ ಅಳುವೇ ನೀನು,
ಗೆಲ್ಲಲು ನೂರಾರು ಮನಸುಗಳ ಮುರಿಯುವೆ ನೀನು,
ಗೆಲುವಿನ ಹಿಂದಿನ ಕಣ್ಣೀರು ಕಾನದಾದವು,
ಅಟ್ಟಹಾಸದಿ ನಗುತಲಿರಲು ನಿನ್ನ ಒಂದು ಹಠವು.....

Thursday, November 27, 2008

Taragelegalu Uduridante...

Aaseya maayamrugava benattutiralu,
praaniyu sigade kaanadaagalu,
kanasinale naa basavalide,
marada neralinali naa viramiside.

Maradinda tarageleyondu udurithu,
nannolagina newtonnana horatandithu.
Manuja jeevanavu maradanthallave,
Adarinda kaliyalu saakashtillave?

Jeevanadali beleyuta naavu,
kanasugala chiguruala belesuvevu.
Parshramada bisilige myyoddi,
kashtavemba maleyu beleyalu addi.

Bevarina sinchanadi chiguru molethu,
beleyuvudu marada kombeyaagi hosathu.
Saphala jeevanake kanasugale aadhara,
nooraaru kanasugalalle jeevana nirbhara.

Parishramada horethu chiguru murutuvudu,
bevaru hariyada horethu kanasu karaguvudu.
Vrukshadinda kaliyuva maatu baruvudilli,
onagida tarageleyinda gobbara maaduvudalli.

Chiguru muridode alutha kooruvudilla,
haakuva parishramava biduvudilla.
Huttisuvudu mattondu chiguranu,
bharavaadalli beelisuta tannade rembeyanu.

Solina tarageleyannu beelisuta naavu,
adara gobbaradali gellabeku naavu.
Kanasugala rembeyinda beleyabeku,
bharavadalli muridu munnuggabeku.

Beleyabeku jeevanadalli maragalanthe,
danidavarige neralu belakina kodeyanthe,
geluve jeevanada harittinante,
soleniddaru taragelu uduridante.

Saturday, November 8, 2008

WELCOME FRIENDS!!!!

Welcome Friends to my blog.....

The place where I get to say things I wished to say.. where I get to put across thoughts to the larger community.. the intelligentsia and also to the people who have known me for long.. but did not notice that I also had this facet in my personality..

To make the journey more exciting and more special.. I invite you all to share what you feel about what I feel and do..

Waiting for your arrival!!!! Cos this is also one of the homes for my heart apart from my friends' hearts!!!

Wish me luck so that i can give my best!!!